ಅದಿಲಾಬಾದ್ ಜಿಲ್ಲೆಯ ಮರ್ಮುರ್ ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ರಾವ್ ಹೊರಟಿದ್ದರು. ಹೆಲಿಕಾಪ್ಟರ್ ಇನ್ನೇನು ಹಾರಾಟ ಆರಂಭಿಸಬೇಕು ಎನ್ನುವಾಗ ಸಂಪರ್ಕ ಸಾಧನವಿದ್ದ ಬ್ಯಾಗ್ನಿಂದ ಹೊಗೆ ಹೊರಬರುತ್ತಿರುವುದು ಭದ್ರತಾ ಅಧಿಕಾರಿಗೆ ಕಾಣಿಸಿದೆ. ತಕ್ಷಣವೇ ಅವರು ಹೆಲಿಕಾಪ್ಟರ್ನಿಂದ ಬ್ಯಾಗ್ ಹೊರತೆಗೆದಿದ್ದಾರೆ.