ಅಭಿಷೇಕ, ಮಂಗಳಾರತಿ ಸೇರಿದಂತೆ ಅದುವರೆಗೂ ನಡೆದ ಧಾರ್ಮಿಕ ವಿಧಿಗಳನ್ನು ಎಲ್ಇಡಿಯ ಬೃಹತ್ ಪರದೆಗಳ ಮೂಲಕ ಪ್ರಸಾರ ಮಾಡಲಾಗಿತ್ತು. ಆದರೆ, ಸಮಾಧಿಸ್ಥಳದಲ್ಲಿ ನಡೆದ ವಿಧಿಗಳನ್ನು ಪ್ರಸಾರ ಮಾಡದೇ ಇದ್ದುದರಿಂದ ಭಕ್ತರು ಕೋಪಗೊಂಡರು. ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕಾಗಿ ಭಕ್ತರು ಬೃಂದಾವನದತ್ತ ನುಗ್ಗಿದರು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು.