ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು ಎನ್ನುವ ಒಂದೇ ಕಾರಣಕ್ಕೆ ಹೆತ್ತ ಮಗಳನ್ನೇ ಕೊಲೆ ಮಾಡುವ ಮಟ್ಟಕ್ಕೆ ಈ ಸಮಾಜ ಹೋಗಿರುವುದು ದುರಂತಮಯ. ಇವರಲ್ಲಿ ಮನುಷ್ಯತ್ವ ಎಂಬುದು ಲವಲೇಶವೂ ಉಳಿದಿಲ್ಲವೇ? ಜಾತಿ ಎನ್ನುವ ರೋಗ ದಿನೇ ದಿನೇ ಕ್ಯಾನ್ಸರ್ನಂತೆ ಬೆಳೆಯುತ್ತಿದೆ. ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಜನಾಂದೋಲನ ರೂಪಿಸಬೇಕಾದ ತುರ್ತು ಇವತ್ತು ನಮ್ಮ ಮುಂದೆ ಇದೆ.
– ಡಾ. ರಾಜಕುಮಾರ ಎಂ. ದಣ್ಣೂರ, ಅಫಜಲಪುರ