ಎಚ್ಐವಿ ಸೋಂಕು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಎಂಸಿಆರ್ಐನ ಪ್ರಾಧ್ಯಾಪಕಿ ಡಾ. ಅಸೀಮಾ, ಸಾವಯವ ಕೃಷಿ ಉತ್ತೇಜಿಸುತ್ತಿರುವ ಪಿರಿಯಾಪಟ್ಟಣ ಕಣಗಾಲು ಗ್ರಾಮದ ಪದ್ಮಮ್ಮ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಬೆಂಗಳೂರಿನ ಗುಬ್ಬಲಾಳದ ಮಂಗಳಾ ಮೇತ್ರಿ, ಅಶಿಕ್ಷಿತ ಮಹಿಳೆಯರಿಗೆ ನೆರವಾಗುತ್ತಿರುವ ಚಿತ್ರದುರ್ಗದ ಎಂ.ಆರ್.ವಿಜಯಲಕ್ಷ್ಮೀ, ಮಹಿಳೆಯರಿಗೆ ಕರಕುಶಲ ತರಬೇತಿ ನೀಡಿ ಉದ್ಯಮಿಗಳಾಗಲು ನೆರವಾಗುತ್ತಿರುವ ಶಿಕಾರಿಪುರ ತಾಲ್ಲೂಕಿನ ಮುದಿಗೌಡಕೇರಿಯ ಕಾಂಚನಾ, ವಿಕಲಚೇತನ ಮಕ್ಕಳ ಕಂಪ್ಯೂಟರ್ ಶಿಕ್ಷಣ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕೆ.ಕೆ.ಕಾವ್ಯ, ಶಾಲೆಯಿಂದ ಹೊರಗುಳಿದ ಮಕ್ಕಳು ಶಿಕ್ಷಣ ಪಡೆಯಲು ನೆರವಾಗುತ್ತಿರುವ ಮಂಗಳೂರಿನ ವಿಶಾಖ ಕಾಮತ್, ದಮನಿತ ಮಹಿಳೆಯರ ಪರ ದನಿಯೆತ್ತುವ ಮೈಸೂರಿನ ಗೀತಾ ವೇಲುಮಣಿ, ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶಿವಮೊಗ್ಗದ ಕೆ.ಪುಷ್ಪಲತಾ, ಮಕ್ಕಳ ಹಕ್ಕುಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಎನ್.ಸುಜಾತಾ ಹಾಗೂ ಮಹಿಳೆಯರ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮನೋರೋಗ ತಜ್ಞೆ ಡಾ.ಪದ್ಮಾಕ್ಷಿ ಲೋಕೇಶ್ ಅವರನ್ನು
ಸನ್ಮಾನಿಸಲಾಯಿತು.