ರೆಹಮಾನ್ ಸಾಬ್ ಪತ್ನಿ ಬೀಬಿಜಾನ್, ಕುಟುಂಬದ ಸದಸ್ಯರಾದ ನೂರ್ಸಾಬ್, ಮಹಜನ್ಬೀ, ಹುಸೇನ್ ಬೀ ಇದ್ದರು. ಸಂತ್ರಸ್ತ ರೈತ ಕುಟುಂಬ ಇಡೀ ದಿನ ಕಚೇರಿ ಮುಂದೆ ಉಪವಾಸ ಕುಳಿತರೂ ಸಂಬಂಧಿಸಿದ ಅಧಿಕಾರಿ ಬಂದು ಸಮಸ್ಯೆ ಆಲಿಸಲಿಲ್ಲ. ಭೂ ಸ್ವಾಧೀನಾಧಿಕಾರಿ ಹುದ್ದೆ ಅನೇಕ ದಿನಗಳಿಂದ ಖಾಲಿ ಇದ್ದು, ಕಚೇರಿಯ ಪ್ರಭಾರ ವಹಿಸಿಕೊಂಡಿರುವ ಗದಗ ಸಹಾಯಕ ಆಯುಕ್ತರು ಇಲ್ಲಿಗೆ ಬರುವುದೇ ವಿರಳವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ರೆಹಮಾನ್ ಸಾಬ್ ತಿಳಿಸಿದರು.