ದೇವಸ್ಥಾನದ ಪ್ರಾಂಗಣ ತೊಳೆದ ನೀರು ಹೊರಗೆ ಹೋಗಲು ಪೈಪ್ ಜೋಡಿಸಲಾಗಿದೆ. ಕೊಚ್ಚೆ ನೀರು ಚರಂಡಿಯಲ್ಲೇ ನಿಲ್ಲುತ್ತಿರುವುದರಿಂದ ಪೈಪ್ ಮೂಲಕ ಕೊಳಚೆ ನೀರು ದೇವಸ್ಥಾನದ ಒಳಗೆ ಬರುತ್ತಿದೆ. ಇದರಿಂದ ದೇವಸ್ಥಾನದ ಒಳಗಿರುವ ಹುತ್ತ ಕರಗುತ್ತಿದೆ. ಹುತ್ತದ ಮೇಲೆ ದುಪ್ಪಟ್ಟ ಮುಚ್ಚಲಾಗಿದೆ. ಕೊಳಚೆ ನೀರು ಒಳ ಪ್ರವೇಶಿಸುತ್ತಿರುವುದರಿಂದ 6 ತಿಂಗಳಿನಿಂದ ಪೂಜೆ ನಿಲ್ಲಿಸಲಾಗಿದೆ ಎಂದು ದಯಾನಂದ್, ನೇತ್ರಾವತಿ, ನಾಗರಾಜು, ದೇವೀರಮ್ಮ, ಭಾಗ್ಯಮ್ಮ, ಕೆಂಚಯ್ಯ ‘ಪ್ರಜಾವಾಣಿ’ ತಿಳಿಸಿದರು.