ಸೋಮವಾರ ಸಂಜೆ ತಂಗಡಗಿ ಸಮೀಪದ ಕುಂಚಗನೂರ ಬಳಿ ಇರುವ ಕೃಷ್ಣಾ ನದಿ ದಂಡೆಯಲ್ಲಿ ಪಲ್ಲಕ್ಕಿ, ಬೆಳ್ಳಿ ದೇವರುಗಳ ಮೂರ್ತಿಗಳನ್ನು ತೊಳೆಯುವ (ಗಂಗಾಸ್ನಾನ) ಕೆಲಸ ಪೂಜಾರಿಗಳಿಂದ ಶೃದ್ಧೆಯಿಂದ ನಡೆಯಿತು. ದೂರದ ಊರುಗಳಿಂದ ಬಂದ ಭಕ್ತರು ತಮ್ಮೂರಿನಿಂದ ತಂದ ಬಾನ ( ಕಲಿಸಿದ ಅನ್ನ, ಮೊಸರು), ರೊಟ್ಟಿ ಸೇರಿದಂತೆ ಮದ್ಯದ ಬಾಟಲಿಗಳನ್ನು ಹಾಗೂ ಮತ್ತಿತರ ಪದಾರ್ಥಗಳನ್ನು ದೇವರಿಗೆ ಎಡೆಯ ರೂಪದಲ್ಲಿ ಕೊಡುವ ಸಂಪ್ರದಾಯದೊಂದಿಗೆ ಮದ್ಯವನ್ನೂ ಸ್ಥಳದಲ್ಲಿಯೇ ಸ್ವೀಕರಿಸುವ ರೂಢಿ ಈ ಪಲ್ಲಕ್ಕಿ ಉತ್ಸವದ ವೈಶಿಷ್ಟ್ಯ.