‘1896ರ ಬಳ್ಳಾರಿ ಮೀಸಲು ಅರಣ್ಯದ ಭೂಪಟ, 1928ರ ಎಸ್ಓಐ ಭೂಪಟ, ಎರಡೂ ರಾಜ್ಯಗಳ ಕಂದಾಯ ಇಲಾಖೆಯ ಭೂಪಟಗಳ ನಡುವೆ ಇರುವ ವ್ಯತ್ಯಾಸಗಳ ಕುರಿತು ಎರಡೂ ರಾಜ್ಯಗಳು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವವರೆಗೂ ಗಡಿ ವಿವಾದವನ್ನು ಅಂತ್ಯಗೊಳಿಸಲು ಆಗುವುದಿಲ್ಲ ಎಂದು ಎಸ್ಓಐ ಟಿಪ್ಪಣಿ ಸಿದ್ಧಪಡಿಸಿದ್ದು, ಮತ್ತೆ ಸಭೆಯನ್ನು ಮಾರ್ಚ್ 26 ಮತ್ತು 27ರಂದು ಡೆಹರಾಡೂನ್ನಲ್ಲಿ ನಡೆಸಲು ನಿರ್ಧರಿಸಿದೆ’ ಎಂದರು.