ಎಡಗೈ ಸಮುದಾಯಕ್ಕೆ ಸೇರಿದ ಎ. ಮುನಿಯಪ್ಪ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗದ ಅಧ್ಯಕ್ಷ, ಎಂ.ಆರ್.ವೆಂಕಟೇಶ್ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ, ಓ.ಶಂಕರ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್), ಎಸ್.ಮಾರೆಪ್ಪ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಎ.ಮಾನಯ್ಯ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ, ಬಿ.ಎನ್.ಕೃಷ್ಣಮೂರ್ತಿ ಆಹಾರ ಆಯೋಗದ ಅಧ್ಯಕ್ಷ ಮತ್ತು ಕೃಷ್ಣಮೂರ್ತಿ ಅವರನ್ನು ಮಾಹಿತಿ ಹಕ್ಕು ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.