ಯಾದಗಿರಿಯ ದಿನೇಶ್ (24) ಅವರ ಪೋಷಕರು ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಆರಂಭದಲ್ಲಿ ವಿಜಯನಗರದಲ್ಲಿ ವಾಸವಿದ್ದ ಪೋಷಕರು, ನಾಲ್ಕು ವರ್ಷಗಳ ಹಿಂದೆ ರಾಮಮೂರ್ತಿನಗರದ ಚರ್ಚ್ ಬಳಿಗೆ ವಾಸ್ತವ್ಯ ಬದಲಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದ ದಿನೇಶ್, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದರು.