ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಮೂಡಿಸಲು ಶುಕ್ರವಾರ ಸರ್ವಧರ್ಮ ಸಮನ್ವಯ ರಥೋತ್ಸವಕ್ಕೆ ಚಾಲನೆ ಕೊಡಲು ಮುಂದಾಗಿದೆ. ಈ ರಥೋತ್ಸವದಿಂದ ಭಾವೈಕ್ಯ, ಸೌಹಾರ್ದ ಹಾಗೂ ಭ್ರಾತೃತ್ವದ ಭಾವನೆ ಮೂಡಿಸುವುದು ಅದರ ಆಶಯ. ಅಲ್ಲಲ್ಲಿ ಆಯಾ ದೇವರುಗಳ ಉತ್ಸವಮೂರ್ತಿಯನ್ನು ತೇರಿನಲ್ಲಿ ಇಟ್ಟು, ಎಳೆಯುವುದು ಸಾಮಾನ್ಯ ಸಂಗತಿ. ಆದರೆ, ಇದು ಸಂಪೂರ್ಣ ಭಿನ್ನವಾಗಿರಲಿದೆ. ಈ ತೇರಿನಲ್ಲಿ ದೇವರ ಬದಲಾಗಿ ಧರ್ಮಗ್ರಂಥಗಳು ಇರಲಿವೆ. ಅದು ಕೂಡ ಯಾವುದೋ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಗ್ರಂಥವಲ್ಲ. ದೇಶದ ಎಲ್ಲ ಧರ್ಮಗ್ರಂಥಗಳು ಅದರಲ್ಲಿ ಇರಲಿವೆ. ಅಷ್ಟೇ ಅಲ್ಲ, ಬಸವಾದಿ ಶರಣರಿಂದ ರಚನೆಯಾದ ವಚನ ಸಾಹಿತ್ಯ ಕೂಡ ಅದರಲ್ಲಿ ಇರುವುದು ವಿಶೇಷ.