ಎಲ್ಲ ದಾಖಲೆ ಇಟ್ಟುಕೊಂಡು ಆರೋಪ ಮಾಡದೆ, ಆರೋಪ ಮಾಡಿದ ನಂತರ ದಾಖಲೆ ನೀಡುವಂತೆ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೀರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಭದ್ರತೆಯಾಗಿ ನೀಡಿರುವ, ಆನ್ಲೈನ್ನಲ್ಲಿಯೇ ಲಭ್ಯ ಇರುವ ಭೂಮಿಯ ದಾಖಲೆಯೇ ಸಾಕು’ ಎಂದರು. ‘ಯಾರ ವಿರುದ್ಧ ಆರೋಪ ಮಾಡಿದರೂ ರಾಜಕೀಯ ದುರುದ್ದೇಶದಿಂದ ಎಂದು ಹೇಳುತ್ತಾರೆ. ಉಡುಪಿ ಮಾತ್ರವಲ್ಲ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ’ ಎಂದರು.