ಈ ದೇಶದ ಬಹುಸಂಖ್ಯಾತ ವರ್ಗಕ್ಕೆ ಸೇರಿದ ಕೆಲ ರಾಜಕೀಯ ನಾಯಕರು ಇತಿಹಾಸದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿರುವುದನ್ನು ನೋಡಿದಾಗ, ನಮಗೆ ಮರೆವಿಗಿಂತ ಹೆಚ್ಚಾಗಿ ಅರಿವಿನ ಅಗತ್ಯವಿದೆ ಎನ್ನಿಸುತ್ತದೆ. ಇಲ್ಲದಿದ್ದರೆ ಈ ದೇಶ ಮತ್ತೆ ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಛಿದ್ರವಾಗುವ ಅಪಾಯವಿದೆ. ಇತಿಹಾಸದ ಅರಿವು ವರ್ತಮಾನದ ದಾರಿದೀಪವಾಗುವಂತೆ, ಆದರೆ ಬೆಂಕಿ ಹಚ್ಚದಂತೆ ಎಚ್ಚರ ವಹಿಸುವುದು ನಮ್ಮ ಕೈಯಲ್ಲೇ ಇದೆ.