ಕುಂಬಾರಗಡಿಗೆ ಗ್ರಾಮದ ಟಿ.ಪಿ. ಮುದ್ದಯ್ಯ, ಸೋಮಯ್ಯ, ಗಣೇಶ, ಲೋಕೇಶ್, ಮುಟ್ಲು ಗ್ರಾಮದ ವಿ.ಕೆ. ಮನು, ಕಾಶಿ ಬಂಧಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.ಬಂಧಿತರಿಂದ ಕಡವೆ, ಮುಳ್ಳುಹಂದಿ, ಮಂಗ ಸೇರಿದಂತೆ ವಿವಿಧ ಪ್ರಾಣಿಗಳ 40 ಕೆ.ಜಿ ಮಾಂಸ, ಒಂಟಿ ನಳಿಕೆಯ ಮೂರು ಕೋವಿ, ಆರು ಮೊಬೈಲ್, 9 ಕತ್ತಿ ಹಾಗೂ ಟಾರ್ಚ್ ವಶಕ್ಕೆ ಪಡೆಯಲಾಗಿದೆ. ಅಕ್ರಮ ಬೇಟೆ ಹಾಗೂ ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿದೆ.