ಪೇಸ್ ಅವರು ಶರಣ್ಗಿಂತ ಒಂದು ಸ್ಥಾನದಲ್ಲಿ ಹಿಂದಿದ್ದರೂ ಅವರ ಅನುಭವದ ಆಧಾರದ ಮೇಲೆ ಆಯ್ಕೆ ಸಮಿತಿ ಅವರನ್ನು ಆಯ್ಕೆ ಮಾಡಿತ್ತು. ಬೋಪಣ್ಣ ಹಾಗೂ ಪೇಸ್ ಗಾಯಗೊಂಡರೆ ಅಥವಾ ಬೇರೆ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಮಾತ್ರ ಶರಣ್ಗೆ ಆಡುವ ಅವಕಾಶ ಸಿಗಲಿದೆ. ಇದನ್ನು ಮನಗಂಡಿದ್ದ ಶರಣ್ ಚೀನಾಕ್ಕೆ ಪ್ರಯಾಣ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.