ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಮಠಾಧಿಪತಿಗಳ ಕುರಿತು ಮಾತನಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ಕೀಳು ಮಟ್ಟದ ಶಬ್ದಗಳನ್ನು ಬಳಸಬಾರದಿತ್ತು. ಶ್ರದ್ಧಾ ಕೇಂದ್ರವಾಗಿರುವ ಯಲ್ಲಮ್ಮನಗುಡ್ಡ ವಿಚಾರ ಎತ್ತಿರುವುದು ಸರಿ ಅಲ್ಲ. ನಿಮ್ಮ ದೃಷ್ಟಿಯಲ್ಲಿ ಅವರು ಕೀಳು ಎನ್ನುವುದಾದರೆ, ಅವರ ದೃಷ್ಟಿಯಲ್ಲಿ ನೀವೂ ಕೀಳಾಗಿ ಕಾಣುತ್ತಿರಿ’ ಎಂದು ಟೀಕಿಸಿದ್ದಾರೆ.