ನರೇಂದ್ರ ಮೋದಿ ದೇವರಲ್ಲ: ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ, ‘ಪ್ರಧಾನಿ ಮೋದಿ ದೇವರಾ? ಇಲ್ಲವಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ಅವರು ಪ್ರಧಾನಿ. ನಾನು ಅವರಿಗೆ ಮತ ಹಾಕದೇ ಇರಬಹುದು. ಆದರೆ, ನನ್ನ ಪ್ರಧಾನಿಯೂ ಹೌದು. ಅದನ್ನು ನಾನು ಒಪ್ಪಿಕೊಂಡಿದ್ದೇನೆ. ಅದೇರೀತಿ ಅವರನ್ನು ಪ್ರಶ್ನಿಸುವ ಅಧಿಕಾರವೂ ಇದೆ’ ಎಂದು ರೈ ಹೇಳಿದರು.
**
ಸಾಮಾಜಿಕ ಹೋರಾಟಕ್ಕೆ ಬಿಜೆಪಿ ಸ್ಪೂರ್ತಿ
‘ನಾನು ಸಾಮಾಜಿಕ ಹೋರಾಟ ಆರಂಭಿಸಲು ಬಿಜೆಪಿಯೇ ನನಗೆ ಸ್ಪೂರ್ತಿ. ಹೋರಾಟದ ಕಿಚ್ಚು ಬರಲು ಆ ಪಕ್ಷದ ಮುಖಂಡರೇ ಕಾರಣ. ದೇಶದೊಳಗಿರುವ ಯಾವುದೇ ಪಕ್ಷವಾಗಲಿ, ಎಂಥದ್ದೇ ಅಧಿಕಾರ, ಹುದ್ದೆಯ ಆಮಿಷ ತೋರಿಸಿದರೂ ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ. ಆದರೆ, ಯಾವುದೇ ಪಕ್ಷದ ಮುಖಂಡರಿಂದ ತಪ್ಪುಗಳು ನಡೆದಾಗ ಪ್ರಶ್ನಿಸುವ ಪ್ರಜೆಯಾಗಿಯೇ ಕೊನೆಯವರೆಗೂ ಉಳಿಯುತ್ತೇನೆ’ ಎಂದರು.