ವಾಹನ ಪೂರೈಕೆಯ ಗುತ್ತಿಗೆ ಪಡೆದಿದ್ದವರು ವಾಹನಗಳನ್ನು ತಂದು ತಹಶೀಲ್ದಾರ್ ಕಚೇರಿಯ ಹಿಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಅಲ್ಲಿ ಅವುಗಳಿಗೆ ಸೂಕ್ತ ರಕ್ಷಣೆಯಿಲ್ಲದೇ ಬೀದಿನಾಯಿಗಳು ಹಾನಿ ಮಾಡಲು ಆರಂಭಿಸಿದ್ದವು. ಸೀಟಿನ ಮೇಲೆ ಗಲೀಜು ಮಾಡಿ, ಸ್ಪಾಂಜ್ ಅನ್ನು ಕಚ್ಚಿ ಹರಿದು ಹಾಕಿದ್ದವು. ಹೀಗಾಗಿ ಸ್ಕೂಟರ್ಗಳನ್ನು ಮಯೂರವರ್ಮ ವೇದಿಕೆಯ ಗೋದಾಮಿಮನಲ್ಲಿ ಇಡಲಾಗಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕವಷ್ಟೇ ಅವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಅಲ್ಲಿಯವರೆಗೆ ಗೋದಾಮಿನಲ್ಲಿ ಸುರಕ್ಷಿತವಾಗಿ ಇಡಲಾಗುವುದು ಎಂದು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.