‘ಶಾ ಅವರಿಗೆ ಕರ್ನಾಟಕದ ಮೇಲೆ ಅಭಿಮಾನ ಇದ್ದಿದ್ದರೆ ಮಹಾದಾಯಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಯಾವಾಗಲೋ ಬಗೆಹರಿಸುತ್ತಿದ್ದರು. ಅಲ್ಲದೆ, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಿಂದ ಸಾಕಷ್ಟು ಅನುದಾನದ ಉಡುಗೊರೆ ನೀಡುತ್ತಿದ್ದರು. ಇದ್ಯಾವುದನ್ನೂ ಮಾಡದೆ, ವಿರೋಧ ಪಕ್ಷಗಳ ವಿರುದ್ಧ ಮಾತನಾಡುವುದು ಎಷ್ಟು ಸರಿ’ ಎಂದು ಮಧು ಪ್ರಶ್ನಿಸಿದರು.