‘ಆಭರಣ ಯಾರಿಗಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನುವುದರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಮ್ಮೆ ಮುಂಬೈನಿಂದ ಬಂದ ಉದ್ಯಮಿಗೆ ನೀಡಲಾಗುತ್ತಿತ್ತು. ಮತ್ತೊಮ್ಮೆ ಹುಬ್ಬಳ್ಳಿ ತಲುಪುತ್ತಿದ್ದಂತೆ ಕರೆ ಬರುತ್ತದೆ. ಅವರಿಗೆ ನೀಡಬೇಕು ಎಂದೆನ್ನುತ್ತಿದ್ದಾರೆ, ಮಗದೊಮ್ಮೆ ಆಭರಣ ಮಳಿಗೆಗೆ ನೀಡಲು ಹೋಗುತ್ತಿದ್ದೆವು ಎಂದೆನ್ನುತ್ತಿದ್ದಾರೆ. ಹೀಗಾಗಿ ಸಂಪೂರ್ಣ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು.