ಬೆಂಗಳೂರು; ಕೆ.ಆರ್.ಪುರ ಸಮೀಪದ ಆವಲಹಳ್ಳಿಯ ಮುನೇಶ್ವರ ಸ್ವಾಮಿಯ 218ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ನಾಲ್ಕು ದಿನಗಳ ಕಾಲ ನಡೆದ ಜಾತ್ರೆಗೆ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಬಂದಿದ್ದರು.
ಮಹಾನವಮಿ ಪಾಡ್ಯದಿಂದ ದಶಮಿಯವರೆಗೆ ಮುನೇಶ್ವರ ಸ್ವಾಮಿಯನ್ನು ಪಟ್ಟದಲ್ಲಿ ಕೂರಿಸಿ, ದಶಮಿ ದಿನ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆತರುತ್ತಾರೆ. ಇಲ್ಲಿ ವಿವಿಧ ಪೂಜಾ ಕೈಂಕಾರ್ಯಗಳನ್ನು ನೆರವೇರಿಸುತ್ತಾರೆ.
ಜಾತ್ರೆಯ ಭಾಗವಾಗಿ ಗಣಪತಿ, ಕಾಟೇರಮ್ಮ, ಶನೇಶ್ವರ, ಬಸವೇಶ್ವರ, ಸೂರಮ್ಮ ಕೈವಾರ ಯೋಗಿ ನಾರಾಯಣ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿಶೇಷ ಸೇವಾ ಕಾರ್ಯಕ್ರಮಗಳು ನಡೆದವು.
ಕೀಲು ಕುದುರೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ ಹಾಗೂ ಹಳ್ಳಿಸೊಗಡಿನ ಆರತಿ, ದೀಪಗಳು ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು. ಎತ್ತಿನಬಂಡಿ, ಟ್ರಾಕ್ಟರನಲ್ಲಿ ಪಾನಕ, ಮಜ್ಜಿಗೆ, ಕೊಸಂಬರಿ ವಿತರಿಸುವುದು ಕಂಡು ಬಂತು.