<p><strong>ಚೆನ್ನೈ:</strong> ಈ ಸಲದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ನಗದು ಬಹುಮಾನ ಘೋಷಿಸಿದ್ದಾರೆ.</p>.<p>ಪದಕಗಳನ್ನು ಜಯಿಸಿ ಅಮೋಘ ಸಾಧನೆ ಮಾಡಿದ ತಮಿಳುನಾಡಿನ ಸ್ಕ್ವ್ಯಾಷ್ ಆಟಗಾರರಾದ ಜೋಷ್ನಾ ಚಿಣ್ಣಪ್ಪ, ದೀಪಿಕಾ ಪಳ್ಳಿಕಲ್, ಸೌರವ್ ಘೋಷಾಲ್, ಟೇಬಲ್ ಟೆನಿಸ್ ಪಟುಗಳಾದ ಶರತ್ ಕಮಲ್, ಜ್ಞಾನಶೇಖರನ್ ಸತ್ಯನ್ ಅವರಿಗೆ ಪತ್ರ ಬರೆದು ಅವರು ಅಭಿನಂದಿಸಿದ್ದಾರೆ.</p>.<p>‘ಎರಡು ಬೆಳ್ಳಿ ಪದಕಗಳನ್ನು ಗೆದ್ದ ದೀಪಿಕಾ ಅವರಿಗೆ ₹60 ಲಕ್ಷ, ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಜೋಷ್ನಾ ಹಾಗೂ ಸೌರವ್ ಘೋಷಾಲ್ ಅವರಿಗೆ ತಲಾ ₹30 ಲಕ್ಷ<br /> ನಗದು ಬಹುಮಾನ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.</p>.<p>ಚಿನ್ನದ ಸಾಧನೆ ಮಾಡಿದ ಟೇಬಲ್ ಟೆನಿಸ್ನ ಪುರುಷರ ತಂಡ ವಿಭಾಗದಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದ ಶರತ್ ಕಮಲ್ ಹಾಗೂ ಜ್ಞಾನಶೇಖರನ್ ಸತ್ಯನ್ ಅವರಿಗೆ ಈ ಮೊದಲು ₹50 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ನಂತರ ನಡೆದ ಟೇಬಲ್ ಟೆನಿಸ್ನ<br /> ಪುರುಷರ ಡಬಲ್ಸ್ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಕಂಚಿನ ಪದಕಗಳನ್ನು ಶರತ್ ಕಮಲ್ ಗೆದ್ದಿದ್ದರು. ಇದೇ ಕ್ರೀಡೆಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸತ್ಯನ್ ಅವರು ಬೆಳ್ಳಿ ಪದಕ ಜಯಿಸಿದ್ದರು.</p>.<p>‘ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಆಟವಾಡಿದ ಇವರಿಬ್ಬರಿಗೂ ಹೆಚ್ಚಿನ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಇಬ್ಬರಿಗೂ ಹೆಚ್ಚುವರಿಯಾಗಿ ತಲಾ ₹50 ಲಕ್ಷ ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಈ ಸಲದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ನಗದು ಬಹುಮಾನ ಘೋಷಿಸಿದ್ದಾರೆ.</p>.<p>ಪದಕಗಳನ್ನು ಜಯಿಸಿ ಅಮೋಘ ಸಾಧನೆ ಮಾಡಿದ ತಮಿಳುನಾಡಿನ ಸ್ಕ್ವ್ಯಾಷ್ ಆಟಗಾರರಾದ ಜೋಷ್ನಾ ಚಿಣ್ಣಪ್ಪ, ದೀಪಿಕಾ ಪಳ್ಳಿಕಲ್, ಸೌರವ್ ಘೋಷಾಲ್, ಟೇಬಲ್ ಟೆನಿಸ್ ಪಟುಗಳಾದ ಶರತ್ ಕಮಲ್, ಜ್ಞಾನಶೇಖರನ್ ಸತ್ಯನ್ ಅವರಿಗೆ ಪತ್ರ ಬರೆದು ಅವರು ಅಭಿನಂದಿಸಿದ್ದಾರೆ.</p>.<p>‘ಎರಡು ಬೆಳ್ಳಿ ಪದಕಗಳನ್ನು ಗೆದ್ದ ದೀಪಿಕಾ ಅವರಿಗೆ ₹60 ಲಕ್ಷ, ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಜೋಷ್ನಾ ಹಾಗೂ ಸೌರವ್ ಘೋಷಾಲ್ ಅವರಿಗೆ ತಲಾ ₹30 ಲಕ್ಷ<br /> ನಗದು ಬಹುಮಾನ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.</p>.<p>ಚಿನ್ನದ ಸಾಧನೆ ಮಾಡಿದ ಟೇಬಲ್ ಟೆನಿಸ್ನ ಪುರುಷರ ತಂಡ ವಿಭಾಗದಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದ ಶರತ್ ಕಮಲ್ ಹಾಗೂ ಜ್ಞಾನಶೇಖರನ್ ಸತ್ಯನ್ ಅವರಿಗೆ ಈ ಮೊದಲು ₹50 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ನಂತರ ನಡೆದ ಟೇಬಲ್ ಟೆನಿಸ್ನ<br /> ಪುರುಷರ ಡಬಲ್ಸ್ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಕಂಚಿನ ಪದಕಗಳನ್ನು ಶರತ್ ಕಮಲ್ ಗೆದ್ದಿದ್ದರು. ಇದೇ ಕ್ರೀಡೆಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸತ್ಯನ್ ಅವರು ಬೆಳ್ಳಿ ಪದಕ ಜಯಿಸಿದ್ದರು.</p>.<p>‘ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಆಟವಾಡಿದ ಇವರಿಬ್ಬರಿಗೂ ಹೆಚ್ಚಿನ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಇಬ್ಬರಿಗೂ ಹೆಚ್ಚುವರಿಯಾಗಿ ತಲಾ ₹50 ಲಕ್ಷ ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>