ವಾರ ಭವಿಷ್ಯ: 25-1-2026ರಿಂದ 31-1-2026 ರವರೆಗೆ; ಸಂಗಾತಿಯ ಆರೋಗ್ಯಕ್ಕಾಗಿ ಶ್ರಮ
Published 24 ಜನವರಿ 2026, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ನಿಮ್ಮ ಶ್ರಮಕ್ಕೆ ತಕ್ಕ ಫಲಗಳು ದೊರೆಯುವುದು ಕಡಿಮೆ. ಆದಾಯವು ಸಾಮಾನ್ಯವಾಗಿದ್ದರೂ ಅದನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳು ದೊರೆ ಯುತ್ತವೆ. ಗುರು ಹಿರಿಯರ ಬಗ್ಗೆ ತಾತ್ಸಾರಗಳು ಖಂಡಿತ ಬೇಡ. ಆಸ್ತಿಸಂಬಂಧಿತ ದಾಖಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಕೆಲವರಿಗೆ ಆತ್ಮಜ್ಞಾನ ಜಾಗೃತಿಗೊಳ್ಳುತ್ತದೆ ಕರಿದ ಪದಾರ್ಥ ಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಶಿಸ್ತನ್ನು ಕಾಯ್ದುಕೊಳ್ಳುವುದು ಉತ್ತಮ. ಕೃಷಿಸಂಬಂಧಿತ ಉಪಕರಣಗಳನ್ನುತಯಾರಿಸು ವವರಿಗೆ ವ್ಯವಹಾರ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ವಸ್ತ್ರಗಳ ವಿನ್ಯಾಸ ಪರಿಣತಿ ಪಡೆದಿರುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಎಲ್ಲರೊಂದಿಗೆ ಕಲಾತ್ಮಕವಾಗಿ ಮಾತ ನಾಡಿ ಜನರನ್ನು ಸೆಳೆಯವಿರಿ. ಆದಾಯವು ನಿಮ್ಮ ಅಗತ್ಯವನ್ನು ಮೀರಿಸುತ್ತದೆ. ಸಂಘಸಂಸ್ಥೆ ಗಳಿಂದ ಅಸ್ತಿ ಪಡೆಯುವ ಯೋಗವಿದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡುತ್ತದೆ. ವೃತ್ತಿಯಲ್ಲಿಸ್ವಲ್ಪಅನುಕೂಲತೆಗಳಾಗುತ್ತವೆ.ಮನೆ ಯಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಬಹುದು. ವ್ಯಾಪಾರ ವ್ಯವ ಹಾರ ಮಾಡುವವರಿಗೆ ಅತಿಯಾದ ಲಾಭವಿರು ವುದಿಲ್ಲ ಹಾಗೆಂದು ನಷ್ಟಸಹ ಇಲ್ಲ. ಕೃಷಿಯಿಂದ ಆದಾಯವಿರುತ್ತದೆ. ಕೆಲವರಿಗೆ ಕಚೇರಿಯಲ್ಲಿ ತರಬೇತಿ ಸಿಗುವ ಯೋಗವಿದೆ. ಕೈಗೆತ್ತಿಕೊಂಡ ಕೆಲಸಗಳು ಖರ್ಚಿಗೆ ಕಾರಣವಾದರೂ ಮುಂದೆ ಪ್ರಯೋಜನಕ್ಕೆ ಬರುತ್ತದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ವಾರದ ಆರಂಭದಲ್ಲಿ ಅರೆ ಮನಸ್ಸಿನಿಂದ ಕೆಲಸ ಮಾಡುವಿರಿ. ಈ ಹಿಂದೆ ಮಾಡಿದ ತಪ್ಪು ಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿ ಸಿರಿ. ಖರ್ಚಿಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿ ರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಶ್ರಮ ವಹಿಸಬೇಕು. ಸಮಾನಮನಸ್ಕರಲ್ಲಿ ಹಣ ಕಾಸಿನ ವಿಚಾರ ದಿಂದ ಸಂಬಂಧಗಳು ವ್ಯತ್ಯಾಸ ಗೊಳ್ಳಬಹುದು.ನಿಮ್ಮ ಮಕ್ಕಳ ಆಸೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಶೀತ ಬಾದೆ ಕೆಲವರನ್ನು ಕಾಡುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳ ವನ್ನು ಕಾಣಬಹುದು ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವಿದೇಶಿ ಕಚೇರಿಯ ಕೆಲಸಗಳು ಸುಲಭವಾಗೇ ಆಗುತ್ತವೆ.
ಕರ್ಕಾಟಕ
(ಪುನರ್ವಸು 4 ಪುಷ್ಯ ಆಶ್ಲೇಷ) ಹೊಸ ಚೈತನ್ಯ ಬಂದಂತೆ ಮನಸ್ಸಿಗೆ ಅನಿಸುತ್ತದೆ.ಆದಾಯವು ಸಾಮಾನ್ಯ ಗತಿಯಲ್ಲಿ ರುತ್ತದೆ. ಮಾತನಾಡುವಾಗ ಎಚ್ಚರವಿರಲಿ. ನಿಷ್ಟುರದ ಮಾತುಗಳು ಬೇಡ. ಸಂಗಾತಿಯ ವ್ಯವಹಾರಗಳಲ್ಲಿ ಆದಾಯ ಹೆಚ್ಚುತ್ತದೆ. ಮತ್ತು ಅವರ ಕಡೆಯಿಂದ ಸ್ಥಿರಾಸ್ತಿ ಮಾಡುವ ಪ್ರಯತ್ನ ಆಗುತ್ತದೆ. ವಿದ್ಯಾರ್ಥಿಗಳಿಗೆಮಧ್ಯಮಫಲಿತಾಂಶ ವಿರುತ್ತದೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾದರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಆಸ್ತಿಯ ವಿಚಾರ ದಲ್ಲಿ ಹೊಸ ತಗಾದೆಗಳು ಬರಬಹುದು. ವಿದೇಶ ದಲ್ಲಿ ಇದ್ದು ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಗಳಿವೆ.ಈಗ ಸರ್ಕಾರಿಸಾಲಪಡೆದು ಕೈಸಾಲಗ ಳನ್ನುತೀರಿಸಬಹುದು.
ಸಿಂಹ
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಹಿರಿಯರ ಹಿರಿಯರ ಜೊತೆ ಹೆಚ್ಚು ಕಾಲ ಕಳೆಯುವಿರಿ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಗಳನ್ನು ಕಾಣಬಹುದು. ಆಸ್ತಿಮಾಡುವ ವಿಚಾರ ದಲ್ಲಿ ಆತುರಬೇಡ. ವಿದ್ಯಾರ್ಥಿಗಳಿಗೆ ಅಧ್ಯಯ ನದಲ್ಲಿ ಯಶಸ್ಸು ಇರುತ್ತದೆ.ಕೆಲವರಿಗೆ ಈಗ ಶಸ್ತ್ರ ಚಿಕಿತ್ಸೆಯ ಸಂದರ್ಭ ಬರಬಹುದು. ಸ್ನೇಹಿತರ ಅನುಕೂಲದಿಂದ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆಎಚ್ಚರವಹಿಸಿರಿ.ಉದ್ದಿಮೆದಾರರು ಶಾಂತ ಚಿತ್ತದಿಂದ ಕಾರ್ಮಿಕರ ಸಮಸ್ಯೆಯನ್ನು ಆಲಿಸುವುದು ಉತ್ತಮ.
ಕನ್ಯಾ
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಮನಸ್ಸಿನಲ್ಲಿ ಸ್ಥಿರ ನಿರ್ಧಾರಗಳಿಲ್ಲದೆ ಒದ್ದಾಡುವಿರಿ. ಆದಾಯವು ತಕ್ಕಮಟ್ಟಿಗೆ ಇರು ತ್ತದೆ. ಬಂಧುಗಳ ಸಹಕಾರಗಳು ಸ್ವಲ್ಪ ಮಾತ್ರ ಸಿಗುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ವ್ಯವಹಾರಗಳ ನಡೆದು ಆದಾಯ ಹೆಚ್ಚು ತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮಕಿಂತಾ ಸ್ವಲ್ಪ ಹೆಚ್ಚಿನ ಪಲಿತಾಂಶ ಬರುತ್ತದೆ. ನಿಮ್ಮ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಬಹಳ ಒಳ್ಳೆಯದು. ಸ್ನಾಯು ಸೆಳೆತಗಳು ಕೆಲವರನ್ನು ಭಾದಿಸಬಹುದು. ಸಂಗಾತಿಯದ್ವಂದ್ವನೀತಿಗಳು ನಿಮಗೆ ಮುಜುಗರ ತರುತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯಬರುವ ಸಾಧ್ಯತೆ ಇದೆ. ಹಿರಿ ಯರಿಂದ ಸ್ವಲ್ಪಮಟ್ಟಿನ ಧನಸಹಕಾರ ಸಿಗುತ್ತದೆ. ವೃತ್ತಿಯಲ್ಲಿ ಅನುಕೂಲಗಳ ಹೆಚ್ಚುತ್ತವೆ.
ತುಲಾ
(ಚಿತ್ತಾ 3 4 ಸ್ವಾತಿ ವಿಶಾಖ 1 2 3) ಧಾರ್ಮಿಕ ಕಾರ್ಯಗಳ ನಡುವೆ ಸ್ವಂತ ಕಾರ್ಯವನ್ನು ಮಾಡಿಕೊಳ್ಳುತ್ತಿರುವವರು ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ನಿಮ್ಮ ಅತಿಯಾದ ಒರಟು ತನ ನಿಮ್ಮನ್ನು ಜನ ಸಮೂಹದಲ್ಲಿ ಇಕ್ಕಟ್ಟಿಗೆ ಸಿಲುಕಿಸಬಹುದು. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ.ವೃತ್ತಿಯಲ್ಲಿ ಹಿತಶತ್ರುಗಳು ಹುಟ್ಟಿಕೊಳ್ಳುವರು. ಸರ್ಕಾರಿ ಕಚೇರಿಯ ಕೆಲಸ ಗಳಲ್ಲಿ ನಿಮ್ಮ ಕೆಲಸ ಸರಾಗವಾಗಿ ಆಗುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರನಿಗೆ ವ್ಯಾಪಾರ ಹೆಚ್ಚಾಗುತ್ತದೆ. ಲೇವಾದೇವಿ ವ್ಯವಹಾ ರಗಳು ಖಂಡಿತ ಬೇಡವೇ ಬೇಡ.ವಿದ್ಯಾರ್ಥಿಗ ಳಿಗೆ ಹೆಚ್ಚು ಶ್ರಮ ವಹಿಸ ಬೇಕಾದ ಅಗತ್ಯವಿದೆ. ವಿದೇಶದಲ್ಲಿರುವ ಸಂಗಾತಿಯನ್ನು ಈಗ ಹೋಗಿ ಸೇರಿಕೊಳ್ಳಬಹುದು.
ವೃಶ್ಚಿಕ
(ವಿಶಾಖಾ 4 ಅನುರಾಧ ಜೇಷ್ಠ) ಸಾಹಸ ಕ್ರೀಡೆಗಳತ್ತ ಮನಸ್ಸು ಹರಿ ಯುತ್ತದೆ. ಆದಾಯವು ಅಗತ್ಯವನ್ನು ಪೂರೈಸು ತ್ತದೆ. ಬಂಧುಗಳ ಕಸಿವಿಸಿಗಳನ್ನು ಎದುರಿಸಿ ನಿಲ್ಲುವಿರಿ. ವಿದೇಶದಲ್ಲಿ ಹೋಟೆಲ್ ಉದ್ಯಮ ಮಾಡುವವರಿಗೆಅಭಿವೃದ್ಧಿಇದೆ.ಸಾಂಪ್ರದಾಯಕ ಬೆಳೆಗಳ ತಳಿರಕ್ಷಕರಿಗೆ ಹೆಚ್ಚುಗೌರವ ಸಿಗುತ್ತದೆ. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಯ ತೊಡಗುತ್ತದೆ. ಈಗ ಆತ್ಮೀಯರೊಂದಿಗೆ ನಿಮ್ಮ ಭಾವನೆ ಗಳನ್ನು ಹಂಚಿಕೊಂಡು ಸಂತೋಷ ಪಡುವಿರಿ. ಪ್ರಯಾಣದಲ್ಲಿ ನಷ್ಟ ಸಂಭವಿಸುವ ಅವಕಾಶಗಳಿವೆ ಎಚ್ಚರ.. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ನಿರೀಕ್ಷಿತ ಆದಾಯ ಬಂದು ಸೇರುತ್ತದೆ. ಮನೆಯ ನಿರ್ಮಾಣದ ಬಗ್ಗೆ ಹಿತೈಷಿಗಳಿಂದ ಸಲಹೆ ದೊರೆಯುತ್ತದೆ.
ಧನು
(ಮೂಲ ಪೂರ್ವಾಷಾಢ ಉತ್ತರಾಷಾಢ 1) ಮನಸ್ಸು ಪ್ರಫುಲ್ಲತೆಯಿಂದ ಕೂಡಿರುತ್ತದೆ. ಆದಾಯವು ಚೇತರಿಸಿಕೊಳ್ಳುತ್ತದೆ. ಸರ್ಕಾರಿ ಸಹಾಯಧನಗಳು ದೊರೆಯುತ್ತವೆ. ಯಾರಿಗೂ ಯಾವುದೇ ರೀತಿಯ ಭರವಸೆಗಳನ್ನು ನೀಡ ಬೇಡಿರಿ. ವಾಹನ ಖರೀದಿಯು ನಿಮ್ಮಿಷ್ಟದಂತೆ ನಡೆಯುತ್ತದೆ. ಉದ್ಯೋಗಕ್ಕೆ ಅನುಕೂಲವಾ ಗುವ ಹೊಸ ಜನರ ಪರಿಚಯವಾಗುತ್ತದೆ. ಮಿತ್ರರ ಜೊತೆ ಸೇರಿ ಸಣ್ಣಮಟ್ಟದ ಉತ್ಪಾದನಾ ಘಟಕವನ್ನು ಆರಂಭಿಸುವ ಆಲೋಚನೆ ಇರು ತ್ತದೆ. ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಅನು ಕೂಲಕ್ಕಾಗಿ ಹೆಚ್ಚು ಶ್ರಮಪಡುವರು. ಸಂಬಂಧಿ ಕರಿಗೆ ಕೊಟ್ಟ ಸಾಲ ಪಾಪಸ್ಸು ಬರುವುದಿಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಹಾಗೂ ಲಾಭ ಸಿಗುತ್ತದೆ.
ಮಕರ
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಮುನ್ನುಗುವ ಉತ್ಸಾಹ ಹೆಚ್ಚಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಶತ್ರುಗಳನ್ನು ಮಣಿಸುವಲ್ಲಿಯಶಸ್ವಿಯಾಗುವಿರಿ.ಆಸ್ತಿಯನ್ನು ಮಾಡುವ ಅವಕಾಶಗಳು ದೊರೆಯುತ್ತವೆ. ಈಗ ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರು ತ್ತದೆ. ಸಾಧ್ಯತೆಗಳಿವೆ. ನಿಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಿರಿ. ಪಿತ್ತವಿಕಾರಗಳು ಕೆಲವರನ್ನು ಬಾಧಿಸಬಹುದು. ಮನೆಯಲ್ಲಿನ ಆಗು ಹೋಗುಗಳ ಬಗ್ಗೆ ಹೆಚ್ಚಿನಗಮನ ಕೊಡಿರಿ. ನೀವು ಮಾಡಿದ್ದ ಕೆಲಸಕ್ಕೆ ದುಪ್ಪಟ್ಟು ಸಂಪಾದ ನೆಯ ಯೋಗವಿರುತ್ತದೆ. ಬೋಧಕ ವರ್ಗದವ ರಿಗೆ ಹೆಚ್ಚಿನ ಸ್ಥಾನಮಾನ ಈಗ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ಮಾತಿಗೆ ಹೆಚ್ಚಿನ ತೂಕ ಇರುತ್ತದೆ.
ಕುಂಭ
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ವ್ಯಾಯಾಮವನ್ನು ಮಾಡಿ ದೇಹ ದಂಡಿಸುವಿರಿ. ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಲಾಭವಿರುತ್ತದೆ. ಹಿರಿಯರಿಗೆ ಈಗ ಸಾರ್ವಜನಿಕರ ಸಹಕಾರಗಳು ದೊರೆಯುತ್ತವೆ. ಆಸ್ತಿ ಮಾಡಲು ಬೇಕಾದ ಹಣದ ಬಗ್ಗೆ ಆಲೋ ಚನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ಶೀತಬಾಧೆ ಕೆಲವ ರನ್ನು ಕಾಡಬಹುದು. ಸಹಕಾರಿ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನಗೌರವ ದೊರೆಯುತ್ತದೆ. ಉದ್ಯೋಗದಲ್ಲಿಸ್ಥಾನ ಬದಲಾವಣೆಯನ್ನು ಮಾಡುವವರು ಎಚ್ಚರವಹಿಸಿರಿ. ನಿಮ್ಮ ಶ್ರಮದ ದುಡಿಮೆಗೆ ತಕ್ಕಫಲವಿರುತ್ತದೆ. ಸಿಹಿ ಪದಾರ್ಥ ಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯಾಪಾರ ವಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.
ಮೀನ
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಯಾವುದೇ ಕೆಲಸ ಮಾಡಲು ಮನಸ್ಸು ಇರುವುದಿಲ್ಲ.ಆದಾಯವು ಕಡಿಮೆಇದ್ದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತಯಾರಿ ನಡೆಸಬಹುದು. ಹೊಸ ಆಸ್ತಿ ಖರೀದಿಮಾಡುವ ವಿಚಾರ ಮುನ್ನೆಲೆಗೆಬರುತ್ತದೆ. ವಾಹನಗಳ ಬಿಡಿಭಾಗಗಳನ್ನುಮಾರಾಟಮಾಡು ವವರ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ನಡವಳಿಕೆ ಯಿಂದ ಬಂಧುಗಳು ದೂರವಾಗುವರು. ಸ್ಥಿರ ನಿರ್ಧಾರಗಳು ನಿಮ್ಮಲ್ಲಿ ಇರಲಿ. ಹೊಟ್ಟೆಯಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ವಿದೇಶಿ ವ್ಯವ ಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಕೆಲವರಿಗೆ ಭಾಷೆಗಳನ್ನು ಕಲಿಯುವ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರಮ ವಹಿಸುವುದು ಒಳಿತು.