ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಡುಮಾಮಿಡಿ ಮಠಕ್ಕೆ ದಲಿತ ಪೀಠಾಧ್ಯಕ್ಷ’

Last Updated 18 ಏಪ್ರಿಲ್ 2018, 20:19 IST
ಅಕ್ಷರ ಗಾತ್ರ

ಮೈಸೂರು: ನಿಡುಮಾಮಿಡಿ ಮಹಾಸಂಸ್ಥಾನ ಮಠದ ಮುಂದಿನ ಪೀಠಾಧ್ಯಕ್ಷರನ್ನಾಗಿ ದಲಿತರೊಬ್ಬರನ್ನು ನೇಮಿಸಲಾಗುವುದು ಎಂದು ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ಬುಧವಾರ ತಿಳಿಸಿದರು.

ಉರಿಲಿಂಗಪೆದ್ದೀಶ್ವರ ಸಂಸ್ಥಾನ ಶಾಖಾ ಮಠ ಹಮ್ಮಿಕೊಂಡಿದ್ದ ಮಠದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಕೆಳಸ್ತರಕ್ಕೆ ಸೇರಿದ್ದ ಅಲ್ಲಮಪ್ರಭು ಅವರನ್ನು ಶೂನ್ಯಸಿಂಹಾಸನದ ಪೀಠಾಧ್ಯಕ್ಷರನ್ನಾಗಿ ನೇಮಿಸಿದ್ದರು. ಇದನ್ನು ಮಾದರಿಯಾಗಿಟ್ಟುಕೊಂಡ ಉರಿಲಿಂಗಪೆದ್ದೀಶ್ವರ ಮಠವು ಅಂದಿನ ಕಾಲದಲ್ಲಿ ದಲಿತರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಿತ್ತು. ಇದಾದ ಬಳಿಕ ಯಾವ ಲಿಂಗಾಯತ–ವೀರಶೈವ ಮಠವೂ ದಲಿತರನ್ನು ನೇಮಿಸಿಲ್ಲ. ಈ ಕೆಲಸವನ್ನು ನಿಡುಮಾಮಿಡಿ ಮಠ ಮಾಡಲಿದೆ. ದಲಿತರಿಗೆ ಪೀಠಾಧ್ಯಕ್ಷ ಸ್ಥಾನ ಮೀಸಲಿಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT