‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಕೆಳಸ್ತರಕ್ಕೆ ಸೇರಿದ್ದ ಅಲ್ಲಮಪ್ರಭು ಅವರನ್ನು ಶೂನ್ಯಸಿಂಹಾಸನದ ಪೀಠಾಧ್ಯಕ್ಷರನ್ನಾಗಿ ನೇಮಿಸಿದ್ದರು. ಇದನ್ನು ಮಾದರಿಯಾಗಿಟ್ಟುಕೊಂಡ ಉರಿಲಿಂಗಪೆದ್ದೀಶ್ವರ ಮಠವು ಅಂದಿನ ಕಾಲದಲ್ಲಿ ದಲಿತರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಿತ್ತು. ಇದಾದ ಬಳಿಕ ಯಾವ ಲಿಂಗಾಯತ–ವೀರಶೈವ ಮಠವೂ ದಲಿತರನ್ನು ನೇಮಿಸಿಲ್ಲ. ಈ ಕೆಲಸವನ್ನು ನಿಡುಮಾಮಿಡಿ ಮಠ ಮಾಡಲಿದೆ. ದಲಿತರಿಗೆ ಪೀಠಾಧ್ಯಕ್ಷ ಸ್ಥಾನ ಮೀಸಲಿಡಲಿದೆ’ ಎಂದರು.