ವಿಧಾನಸಭಾ ಪರಿಷತ್ತು ಸದಸ್ಯರಾದ ನಾರಾಯಣಾ ಸ್ವಾಮಿ, ‘ಹೆಸರಘಟ್ಟ ಮತ್ತು ದಾಸನಪುರ ಹೋಬಳಿಗಳಿಗೆ ಸರ್ಕಾರದಿಂದ ಅನೇಕ ಅನುದಾನಗಳನ್ನು ತಂದು, ಕೆಲಸ ಮಾಡಿಸಿದ್ದೀವಿ. ಮತ್ತೂರು, ಹೆಸರಘಟ್ಟ, ಕೊಡಗಿ ತಿರುಮಲಾಪುರ ಗ್ರಾಮಗಳ ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಇದಕ್ಕೆ ₹3 ಕೋಟಿಗಳನ್ನು ಖರ್ಚು ಮಾಡಲಾಗಿದೆ’ ಎಂದು ತಿಳಿಸಿದರು.