ವಿಜಯಪುರದ ಸಿದ್ದಪ್ಪ, 2016ರಲ್ಲಿ ಇಲಾಖೆ ಸೇರಿದ್ದರು. ಕೆಲಸದ ನಿಮಿತ್ತ ರಾತ್ರಿ ಯಡಿಯೂರಿಗೆ ಹೋಗಿದ್ದ ಅವರು, ಅಲ್ಲಿಂದ 11.45ರ ಸುಮಾರಿಗೆ ಬೈಕ್ನಲ್ಲಿ ಠಾಣೆಗೆ ವಾಪಸಾಗುತ್ತಿದ್ದರು. ಇದೇ ವೇಳೆ ಜಯನಗರ ಕಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದಾಗ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.