ಕುಟ್ಟ, ಶ್ರೀಮಂಗಲ ಬಿಜೆಪಿ ಸ್ಥಾನೀಯ ಸಮಿತಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಅನ್ನಭಾಗ್ಯ, ಕ್ಷೀರಭಾಗ್ಯ ಎಂದು ಹೇಳುತ್ತಾ ಕಾಂಗ್ರೆಸ್ ಸರ್ಕಾರ 5 ವರ್ಷ ಆಡಳಿತದಲ್ಲಿ ಕೊಡಗು ಜಿಲ್ಲೆಗೆ ನೀಡಿರುವುದು ದುರಂತ ಭಾಗ್ಯಗಳಷ್ಟೇ. ಟಿಪ್ಪು ಜಯಂತಿ ಆಚರಣೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ, ಕುಟ್ಟಪ್ಪ ಹತ್ಯೆ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆ ಯೋಜನೆಗಳ ಭಾಗ್ಯವೇ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ನೀಡಿದೆ’ ಎಂದು ದೂರಿದರು.