ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಸ್ರೇಲ್‌ ಮಾದರಿ ಅಭಿವೃದ್ಧಿ ಮಾಡುವೆ’

Last Updated 6 ಮೇ 2018, 19:40 IST
ಅಕ್ಷರ ಗಾತ್ರ

ನಾನು ಸಿ.ಎಂ. ಆದರೆ ಕರ್ನಾಟಕವನ್ನು ಇಸ್ರೇಲ್‌ ಮಾದರಿಯಲ್ಲಿ ಅಭಿವೃದ್ದಿಗೆ ಮಾಡುತ್ತೇನೆ. ನೀರಾವರಿ ಮತ್ತು ವೈಜ್ಞಾನಿಕ ಕೃಷಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತೇನೆ.

ಕುಡಿಯುವ ನೀರು, ಆಹಾರದ ಕೊರತೆಯಿಂದ ಬಳಲುತ್ತಿದ್ದ ಇಸ್ರೇಲ್‌ ದೇಶದಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಎಸ್ರಾಡೇನಿಸ್ ಎಂಬ ಯುವಕ ತನ್ನ ದೇಶದ ಜನರ ಸಂಕಟ ದೂರ ಮಾಡಲು ದೇಶದ ತುಂಬ ಹನಿ ನೀರಾವರಿ ಹಾಗೂ ವೈಜ್ಞಾನಿಕ ಬೇಸಾಯಕ್ಕೆ ಜನರನ್ನು ಹುರಿದುಂಬಿಸಿ ದೊಡ್ಡ ಕ್ರಾಂತಿ ಮಾಡಿದ. ಈಗ ಇಸ್ರೇಲ್‌, ಜಗತ್ತಿಗೆ ಮಾದರಿಯಾಗಿದೆ. ಕರ್ನಾಟಕದಷ್ಟಿರುವ ಈ ಪುಟ್ಟ ದೇಶ ಹಸಿರಿನಿಂದ ನಳನಳಿಸುತ್ತಿದೆ.

ನಾನು ಮುಖ್ಯಮಂತ್ರಿಯಾದರೆ ಇದೇ ಸ್ಫೂರ್ತಿ ಮತ್ತು ಮಾದರಿಯನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ನೀರಾವರಿ ಮತ್ತು ವೈಜ್ಞಾನಿಕ ಕೃಷಿಗೆ ಆದ್ಯತೆ ನೀಡಿ ಕೆಲಸ ಮಾಡುವೆ. ವೈಜ್ಞಾನಿಕ ಬೇಸಾಯದಿಂದ ಕೃಷಿ ಉತ್ಪನ್ನ ಹೆಚ್ಚುವುದು. ಜನರಿಗೆ ಸಾಕಷ್ಟು ಉದ್ಯೋಗ ಅವಕಾಶ ದೊರೆಯುವುದು. ರೈತರ ಆತ್ಮಹತ್ಯೆ ನಿಲ್ಲುತ್ತದೆ. ಬಡ ಕೃಷಿ ಕಾರ್ಮಿಕರು ದೊರದ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.

ಸಂಗಮೇಶ ನಿರಾಣಿ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT