<p><strong>ಮುಂಬೈ:</strong> ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನ ತನ್ನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿತು.</p>.<p>ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 13 ರನ್ಗಳಿಂದ ಮಣಿಸಿತು.</p>.<p>ಸೂರ್ಯಕುಮಾರ್ ಯಾದವ್ (59; 39 ಎ, 2 ಸಿ, 7 ಬೌಂ) ಮತ್ತು ಎವಿನ್ ಲೂಯಿಸ್ (43; 28 ಎ, 2 ಸಿ, 5 ಬೌಂ) ಅವರ ಅತ್ಯುತ್ತಮ ಆರಂಭ, ಹಾರ್ದಿಕ್ ಪಾಂಡ್ಯ (35 ರನ್, 19ಕ್ಕೆ2 ವಿಕೆಟ್) ಅವರ ಆಲ್ರೌಂಡ್ ಆಟ ತಂಡದ ಗೆಲುವಿಗೆ ಕಾರಣವಾಯಿತು.</p>.<p>182 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡದ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾದ ಕ್ರಿಸ್ ಲಿನ್ ಮತ್ತು ಶುಭಮನ್ ಗಿಲ್ ಔಟಾದರು. ರಾಬಿನ್ ಉತ್ತಪ್ಪ (54; 35 ಎ, 3 ಸಿ, 6 ಬೌಂ), ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಆಟವಾಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಅಂತಿಮ ಓವರ್ಗಳಲ್ಲಿ ಚಾಣಾಕ್ಷ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಗೆಲುವನ್ನು ಕಸಿದುಕೊಂಡಿತು.</p>.<p>ಈ ಜಯದೊಂದಿಗೆ ಚಾಂಪಿಯನ್ನರ ನಾಕೌಟ್ ಹಂತಕ್ಕೇರುವ ಕನಸು ಜೀವಂತವಾಗಿ ಉಳಿಯಿತು. ಇದೇ ಒಂಬತ್ತರಂದು ಉಭಯ ತಂಡಗಳು ಕೋಲ್ಕತ್ತದಲ್ಲಿ ಮುಖಾಮುಖಿಯಾಗಲಿವೆ.</p>.<p><strong>ಅಮೋಘ ಆರಂಭ:</strong> ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ಗೆ ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೂಯಿಸ್ ಅಮೋಘ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಇವರಿಬ್ಬರು 91 ರನ್ ಸೇರಿಸಿದರು. 10ನೇ ಓವರ್ನಲ್ಲಿ ಆ್ಯಂಡ್ರೆ ರಸೆಲ್ ಈ ಜೊತೆಯಾಟವನ್ನು ಮುರಿದರು. ಅವರು ಹಾಕಿದ ನಿಧಾನಗತಿಯ ಎಸೆತ ಫಲ ನೀಡಿತು.</p>.<p>ಚೆಂಡಿನ ಗತಿಯನ್ನು ಅರ್ಥೈಸಲು ವಿಫಲರಾದ ಲೂಯಿಸ್ ಅವರು ಕವರ್ಸ್ ಕಡೆಗೆ ಡ್ರೈವ್ ಮಾಡಲು ಯತ್ನಿಸಿದರು. ಆದರೆ ಚೆಂಡು ಥರ್ಡ್ ಮ್ಯಾನ್ ಕಡೆಗೆ ಚಿಮ್ಮಿತು. ಕ್ರಿಸ್ ಲಿನ್ ಸುಲಭ ಕ್ಯಾಚ್ ಪಡೆದರು.</p>.<p>ನಾಯಕ ರೋಹಿತ್ ಶರ್ಮಾ ಅವರಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲು ಆಗಲಿಲ್ಲ. 11 ರನ್ ಗಳಿಸಿದ ಅವರನ್ನು ಸುನಿಲ್ ನಾರಾಯಣ್ ವಾಪಸ್ ಕಳುಹಿಸಿದರು. ಸ್ವೀಪ್ ಮಾಡಲು ಯತ್ನಿಸಿದ ಶರ್ಮಾ ಮಿಡ್ವಿಕೆಟ್ನಲ್ಲಿದ್ದ ಬದಲಿ ಆಟಗಾರ ರಿಂಕುಗೆ ಕ್ಯಾಚ್ ನೀಡಿ ಮರಳಿದರು.</p>.<p>15ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಆ್ಯಂಡ್ರೆ ರಸೆಲ್ ಅವರ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದ ಯಾದವ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿದರು.</p>.<p>ನಂತರ ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ಇವರು ಐದನೇ ವಿಕೆಟ್ಗೆ 24 ರನ್ ಸೇರಿಸಿದರು. ಕೃಣಾಲ್ ಪಾಂಡ್ಯ ಔಟಾದರೂ ಹಾರ್ದಿಕ್ ಅಮೋಘ ಬ್ಯಾಟಿಂಗ್ ಮುಂದುವರಿಯಿತು.</p>.<p>20 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿದ ಅವರು 35 ರನ್ ಗಳಿಸಿದರು. ಜೆಪಿ ಡುಮಿನಿ ಜೊತೆ ಐದನೇ ವಿಕೆಟ್ಗೆ 19 ಎಸೆತಗಳಲ್ಲಿ 31 ರನ್ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನ ತನ್ನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿತು.</p>.<p>ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 13 ರನ್ಗಳಿಂದ ಮಣಿಸಿತು.</p>.<p>ಸೂರ್ಯಕುಮಾರ್ ಯಾದವ್ (59; 39 ಎ, 2 ಸಿ, 7 ಬೌಂ) ಮತ್ತು ಎವಿನ್ ಲೂಯಿಸ್ (43; 28 ಎ, 2 ಸಿ, 5 ಬೌಂ) ಅವರ ಅತ್ಯುತ್ತಮ ಆರಂಭ, ಹಾರ್ದಿಕ್ ಪಾಂಡ್ಯ (35 ರನ್, 19ಕ್ಕೆ2 ವಿಕೆಟ್) ಅವರ ಆಲ್ರೌಂಡ್ ಆಟ ತಂಡದ ಗೆಲುವಿಗೆ ಕಾರಣವಾಯಿತು.</p>.<p>182 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡದ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾದ ಕ್ರಿಸ್ ಲಿನ್ ಮತ್ತು ಶುಭಮನ್ ಗಿಲ್ ಔಟಾದರು. ರಾಬಿನ್ ಉತ್ತಪ್ಪ (54; 35 ಎ, 3 ಸಿ, 6 ಬೌಂ), ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಆಟವಾಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಅಂತಿಮ ಓವರ್ಗಳಲ್ಲಿ ಚಾಣಾಕ್ಷ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಗೆಲುವನ್ನು ಕಸಿದುಕೊಂಡಿತು.</p>.<p>ಈ ಜಯದೊಂದಿಗೆ ಚಾಂಪಿಯನ್ನರ ನಾಕೌಟ್ ಹಂತಕ್ಕೇರುವ ಕನಸು ಜೀವಂತವಾಗಿ ಉಳಿಯಿತು. ಇದೇ ಒಂಬತ್ತರಂದು ಉಭಯ ತಂಡಗಳು ಕೋಲ್ಕತ್ತದಲ್ಲಿ ಮುಖಾಮುಖಿಯಾಗಲಿವೆ.</p>.<p><strong>ಅಮೋಘ ಆರಂಭ:</strong> ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ಗೆ ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೂಯಿಸ್ ಅಮೋಘ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಇವರಿಬ್ಬರು 91 ರನ್ ಸೇರಿಸಿದರು. 10ನೇ ಓವರ್ನಲ್ಲಿ ಆ್ಯಂಡ್ರೆ ರಸೆಲ್ ಈ ಜೊತೆಯಾಟವನ್ನು ಮುರಿದರು. ಅವರು ಹಾಕಿದ ನಿಧಾನಗತಿಯ ಎಸೆತ ಫಲ ನೀಡಿತು.</p>.<p>ಚೆಂಡಿನ ಗತಿಯನ್ನು ಅರ್ಥೈಸಲು ವಿಫಲರಾದ ಲೂಯಿಸ್ ಅವರು ಕವರ್ಸ್ ಕಡೆಗೆ ಡ್ರೈವ್ ಮಾಡಲು ಯತ್ನಿಸಿದರು. ಆದರೆ ಚೆಂಡು ಥರ್ಡ್ ಮ್ಯಾನ್ ಕಡೆಗೆ ಚಿಮ್ಮಿತು. ಕ್ರಿಸ್ ಲಿನ್ ಸುಲಭ ಕ್ಯಾಚ್ ಪಡೆದರು.</p>.<p>ನಾಯಕ ರೋಹಿತ್ ಶರ್ಮಾ ಅವರಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲು ಆಗಲಿಲ್ಲ. 11 ರನ್ ಗಳಿಸಿದ ಅವರನ್ನು ಸುನಿಲ್ ನಾರಾಯಣ್ ವಾಪಸ್ ಕಳುಹಿಸಿದರು. ಸ್ವೀಪ್ ಮಾಡಲು ಯತ್ನಿಸಿದ ಶರ್ಮಾ ಮಿಡ್ವಿಕೆಟ್ನಲ್ಲಿದ್ದ ಬದಲಿ ಆಟಗಾರ ರಿಂಕುಗೆ ಕ್ಯಾಚ್ ನೀಡಿ ಮರಳಿದರು.</p>.<p>15ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಆ್ಯಂಡ್ರೆ ರಸೆಲ್ ಅವರ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದ ಯಾದವ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿದರು.</p>.<p>ನಂತರ ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ಇವರು ಐದನೇ ವಿಕೆಟ್ಗೆ 24 ರನ್ ಸೇರಿಸಿದರು. ಕೃಣಾಲ್ ಪಾಂಡ್ಯ ಔಟಾದರೂ ಹಾರ್ದಿಕ್ ಅಮೋಘ ಬ್ಯಾಟಿಂಗ್ ಮುಂದುವರಿಯಿತು.</p>.<p>20 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿದ ಅವರು 35 ರನ್ ಗಳಿಸಿದರು. ಜೆಪಿ ಡುಮಿನಿ ಜೊತೆ ಐದನೇ ವಿಕೆಟ್ಗೆ 19 ಎಸೆತಗಳಲ್ಲಿ 31 ರನ್ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>