<p><strong>ಹೈದರಾಬಾದ್: </strong>ತೆಲಂಗಾಣದ ಶುಷ್ಕ ಭೂಪ್ರದೇಶದ ರೈತರಿಗೆ, ಪ್ರತಿ ಎಕರೆಗೆ ₹8 ಸಾವಿರ ಸಹಾಯಧನ ನೀಡುವ ನೂತನ ‘ರೈತುಬಂಧು’ ಯೋಜನೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. 58 ಲಕ್ಷಕ್ಕೂ ಹೆಚ್ಚು ರೈತರು ಇದರಿಂದ ಲಾಭ ಪಡೆಯಲಿದ್ದಾರೆ.</p>.<p>ಕರೀಂನಗರ ಜಿಲ್ಲೆಯ ಧರ್ಮರಾಜುಪಲ್ಲೆ–ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ರೈತರೊಬ್ಬರಿಗೆ ಮೊದಲ ಚೆಕ್ ಹಾಗೂ ಪಾಸುಬುಕ್ ನೀಡುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅಧಿಕೃತವಾಗಿ ಯೋಜನೆ ಉದ್ಘಾಟಿಸಿದರು.</p>.<p>ಈ ಯೋಜನೆಗೆ ಮಂಜೂರು ಮಾಡಿದ ಹಣವನ್ನು ಬೇರೆ ಕೆಲಸಗಳಿಗೆ ಬಳಸಬಾರದು ಎಂದು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ನರೇಗಾವನ್ನು ಕೃಷಿ ಅಥವಾ ಕೃಷಿ ಸಂಬಂಧಿ ಜತೆಗೆ ಜೋಡಣೆ ಮಾಡಲು ಸಭೆಯಲ್ಲಿ ನೆರೆದಿದ್ದ ರೈತರು ನಿರ್ಣಯ ಕೈಗೊಂಡರು.</p>.<p>ಜತೆಗೆ ಎಲ್ಲ ಬೆಳೆಗಳಿಗೂ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ 25ರಷ್ಟು ಹೆಚ್ಚಿಸಬೇಕು ಎಂದೂ ನಿರ್ಣಯ ಕೈಗೊಳ್ಳಲಾಗಿದೆ.</p>.<p>ಸಾಲಗಾರ ರೈತರಿಗೆ ನೆರವಾಗುವುದೇ ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ₹12,000 ಕೋಟಿ ಹೊರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ತೆಲಂಗಾಣದ ಶುಷ್ಕ ಭೂಪ್ರದೇಶದ ರೈತರಿಗೆ, ಪ್ರತಿ ಎಕರೆಗೆ ₹8 ಸಾವಿರ ಸಹಾಯಧನ ನೀಡುವ ನೂತನ ‘ರೈತುಬಂಧು’ ಯೋಜನೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. 58 ಲಕ್ಷಕ್ಕೂ ಹೆಚ್ಚು ರೈತರು ಇದರಿಂದ ಲಾಭ ಪಡೆಯಲಿದ್ದಾರೆ.</p>.<p>ಕರೀಂನಗರ ಜಿಲ್ಲೆಯ ಧರ್ಮರಾಜುಪಲ್ಲೆ–ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ರೈತರೊಬ್ಬರಿಗೆ ಮೊದಲ ಚೆಕ್ ಹಾಗೂ ಪಾಸುಬುಕ್ ನೀಡುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅಧಿಕೃತವಾಗಿ ಯೋಜನೆ ಉದ್ಘಾಟಿಸಿದರು.</p>.<p>ಈ ಯೋಜನೆಗೆ ಮಂಜೂರು ಮಾಡಿದ ಹಣವನ್ನು ಬೇರೆ ಕೆಲಸಗಳಿಗೆ ಬಳಸಬಾರದು ಎಂದು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ನರೇಗಾವನ್ನು ಕೃಷಿ ಅಥವಾ ಕೃಷಿ ಸಂಬಂಧಿ ಜತೆಗೆ ಜೋಡಣೆ ಮಾಡಲು ಸಭೆಯಲ್ಲಿ ನೆರೆದಿದ್ದ ರೈತರು ನಿರ್ಣಯ ಕೈಗೊಂಡರು.</p>.<p>ಜತೆಗೆ ಎಲ್ಲ ಬೆಳೆಗಳಿಗೂ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ 25ರಷ್ಟು ಹೆಚ್ಚಿಸಬೇಕು ಎಂದೂ ನಿರ್ಣಯ ಕೈಗೊಳ್ಳಲಾಗಿದೆ.</p>.<p>ಸಾಲಗಾರ ರೈತರಿಗೆ ನೆರವಾಗುವುದೇ ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ₹12,000 ಕೋಟಿ ಹೊರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>