ಬಳ್ಳಾರಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸತೀಶ್ ಚಕ್ರವರ್ತಿ, ನಿಸಾರ್ ಅಹಮ್ಮದ್, ಸೂರ್ಯಪ್ರಕಾಶ್ ಬಾಬು, ಆನಂದ್ ಕುಮಾರ್, ವಿ.ಕೃಷ್ಣ ಪ್ರಸಾದ್, ಕೆ.ಮಮತಾ, ಬಿ.ಸೆಲ್ವರಾಜ್, ಅಗಸ್ಟಿನ್, ಕೆ.ಎಸ್. ಧನುಂಜಯ, ಟಿ.ತಸ್ವಿರ್, ಎಂ.ಮುನಿಸ್ವಾಮಿ, ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಎಸ್.ಮಹಮ್ಮದ್ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.