ಕಳೆದ ವರ್ಷ ಮಹಾಮೈತ್ರಿಕೂಟದಿಂದ ನಿತೀಶ್ ಕುಮಾರ್ ಹೊರನಡೆದ ನಂತರ ಆರ್ಜೆಡಿ ವಿರೋಧ ಪಕ್ಷದ ನಾಯಕನ ಸ್ಥಾನ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಪರಿಷತ್ತಿನ ಒಟ್ಟು ಸದಸ್ಯ ಬಲದಲ್ಲಿ ಆರ್ಜೆಡಿ ಶೇ 10ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿತ್ತು. ವಿಧಾನಸಭೆಯಲ್ಲಿ ರಾಬ್ಡಿದೇವಿ ಅವರ ಮಗ ತೇಜಸ್ವಿ ಯಾದವ್ ವಿರೋಧಪಕ್ಷದ ನಾಯಕರಾಗಿದ್ದಾರೆ.