ಪಂಜಾಬ್ನ ಭಟಿಂಡಾದಲ್ಲಿ ಯೋಧರಾಗಿರುವ ಹುಬ್ಬಳ್ಳಿಯ ಬಸವರಾಜ ಸಣ್ಣಪೂಜಾರ ಅವರಿಗೆ ಇತ್ತೀಚೆಗೆ ಜಮ್ಮು–ಕಾಶ್ಮೀರಕ್ಕೆ ವರ್ಗಾವಣೆಯಾಗಿತ್ತು. ಹೀಗಾಗಿ, ಭಟಿಂಡಾದ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದ ಮಗ ಚೇತನ್ಗೆ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಓದಿಸಲು ತೀರ್ಮಾನಿಸಿ ವರ್ಗಾವಣೆ ಪತ್ರವನ್ನೂ ತಂದಿದ್ದರು. ಆ ಪತ್ರದೊಂದಿಗೆ ಮೇತ್ರೆ ಅವರನ್ನು ಭೇಟಿಯಾದಾಗ, ‘ಶಾಲೆಗೆ ಪ್ರವೇಶ ಕೊಡಬೇಕು ಎಂದರೆ ₹50 ಸಾವಿರ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಇಷ್ಟು ಕೊಡಲು ಸಾಧ್ಯ ಇಲ್ಲ ಎಂದು ಬಸವರಾಜ ಹೇಳಿದ ನಂತರವೂ ಅವರು ಪ್ರವೇಶ ನೀಡಲು ಒಪ್ಪಲಿಲ್ಲ.