ಬೆಂಗಳೂರು: ಮಂಗಳೂರಿನ ಚರ್ಚ್ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿ/ಆರ್ಎಸ್ಎಸ್ ಸಂಭ್ರಮಾಚರಣೆ ಮಾಡಿದೆ. ದಾಳಿ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮದವರು ಅಲ್ಲಿದ್ದರೂ ಸುದ್ದಿವಾಹಿನಿಗಳು ಇದನ್ನು ಪ್ರಸಾರ ಮಾಡಿಲ್ಲ ಎಂಬ ಅಡಿಬರಹವಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ 10 ವರ್ಷ ಹಿಂದಿನದ್ದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ
ಈ ವಿಡಿಯೊ @New_Shahbazkhan ಎಂಬ ಟ್ವಿಟರ್ ಖಾತೆಯಲ್ಲಿ ಮತ್ತು Muslim-Pro ಎಂಬ ಫೇಸ್ಬುಕ್ ಪುಟದಲ್ಲಿ ಶೇರ್ ಆಗಿದೆ. ಟ್ವಿಟರ್ ಮತ್ತು ಫೇಸ್ಬುಕ್ ವಿಡಿಯೊಗಳ ಹೊರತಾಗಿ ಯೂಟ್ಯೂಬ್ನಲ್ಲಿಯೂ 2 ದಿನಗಳ ಹಿಂದೆ ವಿಡಿಯೊ ಶೇರ್ ಆಗಿತ್ತು.
BJP/RSS workers celeberating their victory by attacking a Church in Manglore, Police arrested them all.