ಹಾನಿಯಾಗಿಲ್ಲ: ಕಳೆದ ಬುಧವಾರ ಕೊಕ್ಕರ್ಣೆ, ನಾಲ್ಕೂರು,ಕರ್ಜೆ ಪರಿಸರದಲ್ಲಿ ಭಾರಿ ಗಾಳಿ ಮಳೆಯಿಂದ ಅನೇಕ ವಿದ್ಯುತ್ ಕಂಬಗಳು ಮತ್ತು ಮರಗಳು ಬಿದ್ದು ಹಾನಿಯಾಗಿದ್ದರೂ, ಗುರುವಾರ ರಾತ್ರಿ ಗುಡುಗು ಸಿಡಿಲಿನಿಂದ ಕೂಡಿ ಸುರಿದ ಮಳೆಗೆ ಎಲ್ಲಿಯೂ ಹಾನಿಯಾಗಿಲ್ಲ. ಕೊಕ್ಕರ್ಣೆ, ಕರ್ಜೆ, ನಾಲ್ಕೂರು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಹಜ ಸ್ಥಿತಿಗೆ ತರಲಾಗಿದೆ ಎಂದು ಮೆಸ್ಕಾ ಸಿಬ್ಬಂದಿ ತಿಳಿಸಿದ್ದಾರೆ.