ತರಕಾರಿ ತಳಿಗಳ ಸಂಶೋಧನೆ ವಿಭಾಗದ ವಿಜ್ಞಾನಿ ಡಾ.ಸೆಂಥಿಲ್ ಕುಮಾರ್, ‘ಕಡಿಮೆ ನೀರಿನಲ್ಲಿ ಸಾಮಾನ್ಯವಾಗಿ ನುಗ್ಗೆಕಾಯಿ, ಅಲಸಂದೆ, ಗೋರಿಕಾಯಿ, ಹೀರೆಕಾಯಿ ಬೆಳೆಗಳನ್ನು ಬೆಳೆಯಬಹುದು. ಹರಿಯುವ ನದಿಗಳ ಪಕ್ಕದಲ್ಲಿ ಮಣ್ಣಿನ ತೇವಾಂಶ ಇರುತ್ತದೆ. ಆ ತೇವಾಂಶದಲ್ಲಿ ತರಕಾರಿಗಳನ್ನು ಬೆಳೆಯುವ ವಿಧಾನಗಳ ಸಂಶೋಧನೆ ನಡೆಯುತ್ತಿದ್ದು ಅದು ಫಲಕಾರಿಯಾದರೆ ಕಡಿಮೆ ನೀರಿನಲ್ಲಿ ಹೆಚ್ಚಿನ ಪ್ರಮಾಣದ ತರಕಾರಿಗಳು ನಮಗೆ ಲಭ್ಯವಾಗುತ್ತದೆ’ ಎಂದರು.