ಸುತ್ತಲೂ ಬಂಡ್ ಹಾಳಾಗಿದ್ದು, ಬಂಡ್ ಮತ್ತು ಕೆರೆ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಸರ್ಕಾರ ಪ್ರತಿ ಗ್ರಾಮಕ್ಕೊಂದು ಕೆರೆ ನಿರ್ಮಿಸಬೇಕೆಂಬ ಆಲೋಚನೆಯಲ್ಲಿದೆ. ಆದರೆ ಇದ್ದ ಕೆರೆಗಳನ್ನು ಮತ್ತು ನದಿಗಳನ್ನು ಸಂರಕ್ಷಿಸಿ ವ್ಯರ್ಥ ಪೋಲಾಗುವ ಮಳೆ ನೀರು ಬಳಸಿಕೊಳ್ಳಲು ಹಾಗೂ ಅಂತರ್ಜಲ ವೃದ್ಧಿಗೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.