ಬೆಂಗಳೂರು: ನಿಫಾ ಸೇರಿದಂತೆ ವಿವಿಧ ಸೋಂಕುಗಳನ್ನು ತಡೆಗಟ್ಟುವ ಉದ್ದೇಶದಿಂದ ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಎಚ್ಎಸ್ಆರ್ ಲೇಔಟ್, ಆರ್.ಆರ್. ನಗರ, ಬಾಣಸವಾಡಿ, ಪೀಣ್ಯ ಹಾಗೂ ಹೊಸಕೆರೆಹಳ್ಳಿ ಭಾಗಗಳಲ್ಲಿರುವ ಸುಮಾರು 5,000 ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಪಾಲಿಕೆ ಸಿಬ್ಬಂದಿ ಹಿಡಿದ ಹಂದಿಗಳನ್ನು ಹತ್ತಿರದ ಮಾಂಸದ ಅಂಗಡಿಗಳಿಗೆ ಮಾರಾಟ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿದೆ.