ತಾಲ್ಲೂಕಿನ ಸಾಲಗಾಮೆ, ನಿಟ್ಟೂರು, ಉದ್ದೂರು, ಶಾಂತಿಗ್ರಾಮ, ದುದ್ದ, ಕಂದಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರು ಕೋಸು, ಮುಸುಕಿನ ಜೋಳ, ಆಲೂಗೆಡ್ಡೆ, ರಾಗಿ, ಅವರೆ, ಟೊಮೆಟೊ, ನೆಲಗಡಲೆ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಇತರೆ ಬೆಳೆ ಬೆಳೆಯಲು ಭೂಮಿ ಹದ ಮಾಡುತ್ತಿದ್ದು, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುವುದು ರೈತರಲ್ಲಿ ಮೊಗದಲ್ಲಿ ಸಂತಸ ತಂದಿದೆ.