ರಾತ್ರಿ 10ಕ್ಕೆ ಕೆಲಸಕ್ಕೆ ತೆರಳಿದ್ದ ಅಜಿತ್, ‘ನನಗೆ ಈ ವಾತಾವರಣ ಇಷ್ಟವಾಗುತ್ತಿಲ್ಲ. ಬೆಳಿಗ್ಗೆ ಊರಿಗೆ ವಾಪಸ್ ಹೋಗುತ್ತೇನೆ’ ಎಂದು ಸೈಯದ್ ಹಾಗೂ ಬಿಕ್ರಂ ಬಳಿ ಹೇಳಿದ್ದ. ಅದಕ್ಕೆ, ‘ಬಂದ ದಿನವೇ ಕೆಲಸ ಬಿಟ್ಟು ಹೋಗುವ ಮಾತಾಡ್ತೀಯಾ. ಹೀಗಾದರೆ, ನೀನು ಯಾವತ್ತೂ ಉದ್ಧಾರ ಆಗಲ್ಲ’ ಎಂದಿದ್ದರು. ಇದೇ ವಿಚಾರವಾಗಿ ಪರಸ್ಪರರು ಬೈದಾಡಿಕೊಂಡಿದ್ದರು.