ಉಪ್ಪಿನ ಬೆಟಗೇರಿ, ಹನುಮನಾಳ, ಪುಡಲಕಟ್ಟಿ ಗ್ರಾಮಗಳಲ್ಲಿ ಒಂದೇ ದಿನದಲ್ಲಿ 67 ಮಿ.ಮೀ. ಮಳೆಯಾಗಿದೆ. ಮಳೆಯಿಂದ ಹೊಲಗಳ ಒಡ್ಡು ಒಡೆದು ಹೋಗಿ ಹಾನಿಯಾಗಿರುವ ಕುರಿತು ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಯಿತ್ತಿದೆ. ಡಿಎಪಿ ಗೊಬ್ಬರದ ಕೊರತೆ ಇದ್ದು, ಅದು ಕೂಡ ಆವಕ ಆಗಲಿದೆ ಎಂದು ಮಾಹಿತಿ ನೀಡಿದರು.