ಮೃತ ಚನಿಯ ನಾಯ್ಕರು ಗುರುವಾರ ಸಂಜೆ ಗಾಳಿಮುಖಕ್ಕೆ ಸಾಮಗ್ರಿ ಖರೀದಿಸಲೆಂದು ಪಯಸ್ವಿನಿ ಹೊಳೆ ದಾಟಿ ಬಂದಿದ್ದರು. ಆದರೆ ತಿರುಗಿ ಮನೆಗೆ ಹೋಗುವಾಗ ನೀರಿನ ಪ್ರವಾಹ ಹೆಚ್ಚಿರುವುದನ್ನು ಗಮನಿಸದೆ ನದಿ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಆದೂರು ಠಾಣಾ ಪೊಲೀಸರ ಸಹಕಾರದಲ್ಲಿ ಅಗ್ನಿಶಾಮಕ ದಳವು ಶುಕ್ರವಾರ ಹಾಗೂ ಶನಿವಾರ ಶೋಧ ಕಾರ್ಯ ನಡೆಸಿತ್ತು. ಶನಿವಾರ ಮಧ್ಯಾಹ್ನ ಮೃತದೇಹವು ಕುಂಟಾರು ದೇವಸ್ಥಾನದ ಪರಿಸರದ ಪಯಸ್ವಿನಿ ಹೊಳೆಯಲ್ಲಿ ದೊರೆತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಿಕರಿಗೆ ಬಿಟ್ಟುಕೊಡಲಾಯಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.