ಆಗಿದ್ದೇನು?: ಲಿಂಗನಬಂಡಿಯ ಪುರಾತನ ಮೌನೇಶ್ವರ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಅನೇಕ ದಿನಗಳಿಂದ ಇಳಕಲ್ನ ವ್ಯಕ್ತಿಯೊಬ್ಬರು ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಹೀಗಾಗಿ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಹೋದರು. ಆಗ ಕೆಲಸಗಾರರು ಯಂತ್ರಗಳು, ವಾಹನ ಬಿಟ್ಟು ಪರಾರಿಯಾದರು. ಅಧಿಕಾರಿಗಳು ಸ್ಥಳ ಪರಿಶೀಲಿಸುತ್ತಿದ್ದಾಗ ಡೀಸೆಲ್ ತುಂಬಿದ್ದ ಬ್ಯಾರಲ್ ಉರುಳಿಸಿದಾಗ ಅದು ಸ್ಫೋಟಗೊಂಡು ಬೆಂಕಿಹೊತ್ತಿಕೊಂಡಿತು.