ಗಾಂಧಿಭವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿವಂಗತ ಪ್ರೊ. ಎಚ್.ಆರ್. ದಾಸೇಗೌಡರ ಹೆಸರನ್ನು ಆ ಕಾರ್ಯಕ್ರಮದ ನಿರೂಪಣೆ ಮಾಡಿದವರು ಸ್ಮರಿಸಲಿಲ್ಲ. ದಾಸೇಗೌಡರು ಗಾಂಧಿಭವನದ ಒಂದು ಭಾಗದಲ್ಲಿ ಗಾಂಧಿ ಸಾಹಿತ್ಯದ ಪ್ರಕಟಣೆ ಹಾಗೂ ಮಾರಾಟದ ಉದ್ದೇಶದಿಂದ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದ್ದರು. ಆದರೆ ಆ ಮಳಿಗೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮೂರು ವರ್ಷಗಳಾಗುತ್ತಾ ಬಂದಿವೆ.