ನಗರದ ಲಾರಿ ಮಾಲೀಕರು ವಾಹನಗಳ ಸಂಚಾರ ನಿಲ್ಲಿಸಿ ಮುಷ್ಕರದಲ್ಲಿ ಪಾಲ್ಗೊಂಡರು. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದ ಲಾರಿಗಳನ್ನು ಸಂಘದ ಸದಸ್ಯರು ತಡೆದು ನಿಲ್ಲಿಸಿದರು. ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನಗಳಿಗೆ ವಿನಾಯಿತಿ ನೀಡಿದರು. ಸರಕು ಹೊತ್ತು ಹೊರಟ್ಟಿದ್ದ ಹೊರ ರಾಜ್ಯದ ಲಾರಿಗಳ ಮೇಲೆ ಸ್ಟಿಕ್ಕರ್ ಅಂಟಿಸಿ, ಸರಕನ್ನು ಇಳಿಸಿದ ನಂತರ ಮತ್ತೆ ತುಂಬುವಂತಿಲ್ಲ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.