ಪುರಸಭೆ ಗುತ್ತಿಗೆ ಕಾರ್ಮಿಕರ ಸಂಘಧ ಅಧ್ಯಕ್ಷ ಮಂಜುನಾಥ ಮಾತನಾಡಿ, ‘ಚಳಿ, ಗಾಳಿ ಮಳೆ, ಬಿಸಿಲಿನ ಬೇಗೆ ಎನ್ನದೆ ಪಟ್ಟಣದಲ್ಲಿ ಸ್ವಚ್ಛತೆ ಮಾಡುತ್ತಿದ್ದೇವೆ. 5 ತಿಂಗಳಿಂದಲೂ ಸಂಬಳ ನೀಡಿಲ್ಲ. ನಮ್ಮ ಸಂಸಾರದ ಗತಿ ಏನು. ಶಾಲೆಗಳಿಗೆ ಮಕ್ಕಳನ್ನು ದಾಖಲೆ ಮಾಡಿಸಬೇಡವೇ. ಹೊಟ್ಟೆಗೆ ಏನು ತಿನ್ನಬೇಕು. ಬೇರೆಲ್ಲಾ ಕಾಮಗಾರಿಗಳಿಗೆ ಹಣ ಇದೆ. ನಮಗೆ ಕೊಡುವ ಕನಿಷ್ಠ ಕೂಲಿಗೆ ಹಣ ಇಲ್ಲ ಎಂದರೆ ಹೇಗೆ’ ಎಂದರು.