ದೇವಸ್ಥಾನವೊಂದನ್ನು ಜೆಸಿಬಿಯಿಂದ ಕೆಡವುತ್ತಿರುವ ದೃಶ್ಯಗಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಕಾಂಚಿಪುರದ ನಿಮಾಂತಕರಾರ ಬೀದಿಯಲ್ಲಿರುವ ಸಾವಿರ ವರ್ಷ ಹಳೆಯದಾದ ಶ್ರೀನಲ್ಲಗಂಬ ವಿನಾಯಗರ್ (ವಿನಾಯಕ ದೇವಸ್ಥಾನ) ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ’ ಎಂಬ ಬರಹವೂ ಈ ವಿಡಿಯೊದಲ್ಲಿ ಇದೆ. ‘ತತ್ವಂ–ಅಸಿ’ ಎನ್ನುವ ‘ಎಕ್ಸ್’ ಖಾತೆಯ ಈ ವಿಡಿಯೊವನ್ನು ಹಂಚಿಕೊಂಡು, ‘ಹಿಂದೂ ದೇವಾಲಯಗಳ ಮೇಲೆ ನಡೆಸಿರುವ ಅಪರಾಧಕ್ಕಾಗಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಅವರು ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂಬುದಕ್ಕೆ ನೋಡುವುದಕ್ಕೆ ಕಾಯುತ್ತಿದ್ದೇನೆ. ಯಾವೆಲ್ಲಾ ಹಿಂದೂ ಮತದಾರರು ಇವರಿಗೆ ಮತ ನೀಡಿದ್ದಾರೆ ಅವರಿಗೆ ನಾಚಿಕೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.