<p><strong>ಮುಂಬೈ (ಪಿಟಿಐ):</strong> ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್ ಪ್ರದೇಶಕ್ಕೆ ನೀರು ಪೂರೈಸಲು ಸಾಂಗ್ಲಿ ಸಮೀಪದ ಮೀರಜ್ ನಿಲ್ದಾಣದಿಂದ ಹೊರಟಿದ್ದ ವಿಶೇಷ ‘ಜಲ ರೈಲು’ 18 ಗಂಟೆಗಳ ಪ್ರಯಾಣದ ನಂತರ ಮಂಗಳವಾರ ಬೆಳಿಗ್ಗೆ ಗಮ್ಯ ಸ್ಥಾನ ತಲುಪಿದೆ.<br /> <br /> ಈ ಜಲ ರೈಲಿನ 10 ಬೋಗಿಗಳಲ್ಲಿ ಒಟ್ಟು 5 ಲಕ್ಷ ಲೀಟರ್ ನೀರು ಸಾಗಿಸಲಾಗಿದೆ. ಪ್ರತಿ ಬೋಗಿಯಲ್ಲಿಯೂ ತಲಾ 50 ಸಾವಿರ ಲೀಟರ್ ನೀರು ಹಿಡಿಸುತ್ತದೆ. 350 ಕಿ.ಮೀ ಪ್ರಯಾಣದ ನಂತರ ರೈಲು ಸೋಮವಾರ ಬೆಳಿಗ್ಗೆ 5 ಗಂಟೆಗೆ ಲಾತೂರ್ ರೈಲು ನಿಲ್ದಾಣ ತಲುಪಿದೆ ಎಂದು ಕೇಂದ್ರ ರೈಲ್ವೆಯ ವಕ್ತಾರ ನರೇಂದ್ರ ಪಾಟೀಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ನೀರು ಪೂರೈಕೆಗೆಂದೇ ಇರುವ 10 ಬೋಗಿಯ ಈ ರೈಲು ರಾಜಸ್ತಾನದ ಕೋಟಾದಿಂದ ಮೀರಜ್ಗೆ ಭಾನುವಾರ ಬಂದಿತ್ತು.<br /> <br /> ಏಪ್ರಿಲ್ 15ರಂದು 50 ಬೋಗಿಗಳ ಮತ್ತೊಂದು ರೈಲು ನೀರು ಪೂರೈಸಲಿದೆ. ಒಂದು ಬೋಗಿಯಲ್ಲಿ 54 ಸಾವಿರ ಲೀಟರ್ ನೀರು ಸಾಗಿಸಬಹುದು ಎಂದು ಪಾಟೀಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್ ಪ್ರದೇಶಕ್ಕೆ ನೀರು ಪೂರೈಸಲು ಸಾಂಗ್ಲಿ ಸಮೀಪದ ಮೀರಜ್ ನಿಲ್ದಾಣದಿಂದ ಹೊರಟಿದ್ದ ವಿಶೇಷ ‘ಜಲ ರೈಲು’ 18 ಗಂಟೆಗಳ ಪ್ರಯಾಣದ ನಂತರ ಮಂಗಳವಾರ ಬೆಳಿಗ್ಗೆ ಗಮ್ಯ ಸ್ಥಾನ ತಲುಪಿದೆ.<br /> <br /> ಈ ಜಲ ರೈಲಿನ 10 ಬೋಗಿಗಳಲ್ಲಿ ಒಟ್ಟು 5 ಲಕ್ಷ ಲೀಟರ್ ನೀರು ಸಾಗಿಸಲಾಗಿದೆ. ಪ್ರತಿ ಬೋಗಿಯಲ್ಲಿಯೂ ತಲಾ 50 ಸಾವಿರ ಲೀಟರ್ ನೀರು ಹಿಡಿಸುತ್ತದೆ. 350 ಕಿ.ಮೀ ಪ್ರಯಾಣದ ನಂತರ ರೈಲು ಸೋಮವಾರ ಬೆಳಿಗ್ಗೆ 5 ಗಂಟೆಗೆ ಲಾತೂರ್ ರೈಲು ನಿಲ್ದಾಣ ತಲುಪಿದೆ ಎಂದು ಕೇಂದ್ರ ರೈಲ್ವೆಯ ವಕ್ತಾರ ನರೇಂದ್ರ ಪಾಟೀಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ನೀರು ಪೂರೈಕೆಗೆಂದೇ ಇರುವ 10 ಬೋಗಿಯ ಈ ರೈಲು ರಾಜಸ್ತಾನದ ಕೋಟಾದಿಂದ ಮೀರಜ್ಗೆ ಭಾನುವಾರ ಬಂದಿತ್ತು.<br /> <br /> ಏಪ್ರಿಲ್ 15ರಂದು 50 ಬೋಗಿಗಳ ಮತ್ತೊಂದು ರೈಲು ನೀರು ಪೂರೈಸಲಿದೆ. ಒಂದು ಬೋಗಿಯಲ್ಲಿ 54 ಸಾವಿರ ಲೀಟರ್ ನೀರು ಸಾಗಿಸಬಹುದು ಎಂದು ಪಾಟೀಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>