ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಸಾಹಿಲ್, ದಿನೇಶ್, ಟಿಂಕು, ಸುದೀಪ್, ವಿಕಾಸ್ ಕಶ್ಯಪ್ ಮತ್ತು ಸೋನು ಎಂಬುವವರನ್ನು ಖುಲಾಸೆಗೊಳಿಸಿ ಆದೇಶಿಸಿದರು. ಗಲಭೆ ವೇಳೆ 2020 ಫೆಬ್ರುವರಿ 24ರ ರಾತ್ರಿ ಮತ್ತು 25ರಂದು ದಾಂಧಲೆ ನಡೆಸಿದ, ಲೂಟಿ ಮಾಡಿದ ಆರೋಪ ಇವರ ಮೇಲಿತ್ತು.