ಮುಂಬೈ, ಕೊಯಮತ್ತೂರು, ಪಶ್ಚಿಮ ಬಂಗಾಳ: ಮಕರ ಸಂಕ್ರಾಂತಿ ನಿಮಿತ್ತ ದೇಶದ ವಿವಿಧೆಡೆ ಸಂಭ್ರಮದ ವಾತಾವರಣ ಕಳೆಗಟ್ಟುತ್ತಿದ್ದು, ಭಾನುವಾರ ಜನರು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಪೂಜೆ ಹಾಗೂ ಪೊಂಗಲ್ ತಯಾರಿಸಿ ನೈವೇದ್ಯ ಸಲ್ಲಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಗಂಗಾ ಸಾಗರದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ನಮನ ಸಲ್ಲಿಸುತ್ತಿದ್ದಾರೆ.